ಕಹಿಯ ನೀನು ಸವಿಯದೆ
ಸಿಹಿಯ ಕೇಳುವುದೆ?
ಭೋಗದಿಂದ ಈ ಜಗದೊಳು
ಬದುಕ ಸವೆಸುವುದೆ?
ವಾಮಮಾರ್ಗವು ಇಲ್ಲಿ
ತರವಲ್ಲ ನಿನಗೆ
ನಿಜ ಪಥವಿರುವುದು
ಪಡೆವ ಸಿರಿ ಸಂಪತ್ತಿಗೆ.
ಮಾಯೆಯೊಳು ಬದುಕಿ ನೀ
ಪ್ರತಿಷ್ಠೆ ಸ್ವಾಭಿಮಾನದೊಳಗೆ
ಜನುಮದಲಿ ಮಸಣದಲಿ
ಬೆಲೆಯಿಲ್ಲ ಅದಕೆ.
ಆಲಯದ ಪೂಜೆಯೊಳು
ಡಂಭಾಚಾರವೇಕೆ?
ನಿರ್ಮಲ ಮನವು ಸಾಕು
ಉಪಾಸನೆಗೆ.
ಕಷ್ಟದಲೂ ಇಷ್ಟದಲೂ
ನೀನೇ ಇಲ್ಲಿವರೆಗೆ
ಮಿಥ್ಯದಲೂ ಸತ್ಯದಲೂ
ನೈತಿಕತೆಯೆ ನಿನ್ನ ಬಲಕೆ
ಹುಡುಕುವೆಯಾ ಅಂಧಕಾರದಲಿ
ನೆಮ್ಮದಿಯನು ಎಲ್ಲ ಕಡೆಗೆ?
ನಿನ್ನಲ್ಲೆ ಹುದುಗಿದೆ
ನೀ ಹೋದಾಗ ಆನಂದದೆಡೆಗೆ.
ಸಿಹಿಯ ಕೇಳುವುದೆ?
ಭೋಗದಿಂದ ಈ ಜಗದೊಳು
ಬದುಕ ಸವೆಸುವುದೆ?
ವಾಮಮಾರ್ಗವು ಇಲ್ಲಿ
ತರವಲ್ಲ ನಿನಗೆ
ನಿಜ ಪಥವಿರುವುದು
ಪಡೆವ ಸಿರಿ ಸಂಪತ್ತಿಗೆ.
ಮಾಯೆಯೊಳು ಬದುಕಿ ನೀ
ಪ್ರತಿಷ್ಠೆ ಸ್ವಾಭಿಮಾನದೊಳಗೆ
ಜನುಮದಲಿ ಮಸಣದಲಿ
ಬೆಲೆಯಿಲ್ಲ ಅದಕೆ.
ಆಲಯದ ಪೂಜೆಯೊಳು
ಡಂಭಾಚಾರವೇಕೆ?
ನಿರ್ಮಲ ಮನವು ಸಾಕು
ಉಪಾಸನೆಗೆ.
ಕಷ್ಟದಲೂ ಇಷ್ಟದಲೂ
ನೀನೇ ಇಲ್ಲಿವರೆಗೆ
ಮಿಥ್ಯದಲೂ ಸತ್ಯದಲೂ
ನೈತಿಕತೆಯೆ ನಿನ್ನ ಬಲಕೆ
ಹುಡುಕುವೆಯಾ ಅಂಧಕಾರದಲಿ
ನೆಮ್ಮದಿಯನು ಎಲ್ಲ ಕಡೆಗೆ?
ನಿನ್ನಲ್ಲೆ ಹುದುಗಿದೆ
ನೀ ಹೋದಾಗ ಆನಂದದೆಡೆಗೆ.

No comments:
Post a Comment